Slide
Slide
Slide
previous arrow
next arrow

ವರಮಹಾಲಕ್ಷ್ಮಿ ಉದ್ಯಾಪನೆ: ಭಕ್ತಿಸುಧೆ ಹರಿಸಿದ ಭಜನಾ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಕಬ್ನಳ್ಳಿಯಲ್ಲಿ ನಡೆದ ವರಮಹಾಲಕ್ಷ್ಮಿ ವೃತ ಉದ್ಯಾಪನಾ ಕಾರ್ಯಕ್ರಮದಲ್ಲಿ ಸೋಂದಾ ಸ್ವರ್ಣವಲ್ಲೀ ಮಾತೃಮಂಡಳಿಯವರ ಭಜನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಆರಂಭದಲ್ಲಿ ಗಣಪತಿ ಸ್ತುತಿಯೊಂದಿಗೆ ಆರಂಭವಾದ ಭಜನಾ ಕಾರ್ಯಕ್ರಮ ಸರ್ವಮಂಗಲೆ ಶ್ರೀದೇವಿ ಕುರಿತು ವಿವಿಧ ಭಜನೆ, ರಾಜರಾಜೇಶ್ವರಿ ಕುರಿತು ಭಜನೆ, ರಾಮಭಜನ್, ನಂದಗೋಪ ಕೃಷ್ಣನ ಕುರಿತು ಭಜನೆ ಹೀಗೆ ಎರಡೂವರೆ ತಾಸಿಗೂ ಮಿಕ್ಕಿ ನಡೆಯಿತು. ಮಾತೃಮಂಡಳಿಯ 12ಸದಸ್ಯರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶಿಗೇಮನೆ, ಸದಸ್ಯೆಯರಾದ ಸುಮಾ ಪಿ.ಬೆಣ್ಣೆಗದ್ದೆ, ಶೃತಿ ಹೆಗಡೆ ಮತ್ತಿತರಿದ್ದರು. ಹಾಮೊನಿಯಂನಲ್ಲಿ ರಾಧಾ ಹೆಗಡೆ, ತಬಲಾದಲ್ಲಿ ಆನಂದ ಭಟ್ಟ ದಾಯಿಮನೆ ಸಹಕರಿಸಿದರು. ವರಮಹಾಲಕ್ಷ್ಮಿ ವೃತ ಉದ್ಯಾಪನಾ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಹಾಲಕ್ಷ್ಮಿ ವಿಶೇಷ ಮಂಟಪವನ್ನು ಕಲಾವಿದ ಎಂ.ಎಸ್.ಹೆಗಡೆ ಗೋಳಗೋಡ ನಿರ್ಮಿಸಿದ್ದರು. ಮಂಜುನಾಥ ಹೆಗಡೆ ಕಬ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top